ಅಭೀಃ ಫೌಂಡೇಶನ್
ಋಷಿ-ಕೃಷಿ ಸಂಸ್ಕೃತಿ ಪುನಶ್ಚೇತನ
-----------
ನಮ್ಮ ಆಧ್ಯಾತ್ಮಿಕ ನಾಯಕರು ಬಯಸಿದ ಸುಸಂಸ್ಕೃತ ಸಮಾಜ ನಿರ್ಮಿಸುವುದಕ್ಕಾಗಿ ಅಯೋಜಿಸುತ್ತಿರುವ ವಿವಿಧ ಕಾರ್ಯಕ್ರಮಗಳು
1. ನಂದಿ ಯಾತ್ರೆ
3. ನಂದಿ ಸಮಾವೇಶ ಹಾಗೂ ಸಮ್ಮೇಳನಗಳು
5. ಕಂಬಿ ಮಲ್ಲಯ್ಯನಿಂದ ನಂದಿಗಳ ರಕ್ಷಣೆ
6. ನಂದಿ ಸೇವಾ ಪ್ರೋತ್ಸಾಹ ಧನ ವಿತರಣೆ
9. ರೈತ ಮಿತ್ರ ಸ್ವಯಂ ಸೇವಕರ ಸಂಘಗಳ ಸ್ಥಾಪನೆ
12. ಓಂ ಅಧ್ಯಾತ್ಮಿಕ ಕೇಂದ್ರ, ವಡವಡಗಿ
-----------
ಮಣ್ಣು, ರೈತರು ಮತ್ತು ಆಹಾರ ಸೇವಿಸುವವರ ರಕ್ಷಣೆಗಾಗಿ
ಜೋಡೆತ್ತಿನ ರೈತರ
ಪಕ್ಷಾತೀತ ಪತ್ರ ಚಳುವಳಿ
-----------
ರೈತರ ಸಮೃದ್ಧಿಗಾಗಿ ಜಗತ್ತಿನಾದ್ಯಂತ ಸದ್ಗರು ಅವರು ಪ್ರಾರಂಭಿಸಿದ 'ಮಣ್ಣು ಉಳಿಸಿ'
ಅಭಿಯಾನದ ಮೂಲ ಉದ್ದೇಶಕ್ಕೆ ಪೂರಕವಾಗಿ ಕೆಲಸ ಮಾಡುವುದು ನಮ್ಮ ಧ್ಯೇಯವಾಗಿದೆ.
Our mission is to complement the original mission of the 'Save Soil' campaign. Which is started by the Sadhguru around the world for the prosperity of farmers. Click here to Learn More.
"ರೈತರು ದೊಡ್ಡದಾದ ಗುರಿಯೊಂದಿಗೆ ಪಕ್ಷಾತೀತವಾಗಿ ಒಂದಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾರ್ಗೋಪಾಯಗಳನ್ನು ಪರಿಚಯಿಸುವುದು."
ರೈತರನ್ನು ಒಂದುಗೂಡಿಸುವ ಪಕ್ಷಾತೀತ ಬೇಡಿಕೆಗಳು:
1. ಕೃಷಿ ಕ್ಷೇತ್ರಕ್ಕೆ ಪ್ರತಿ ವರ್ಷ 25 ಪ್ರತಿಶತ ಬಡ್ಜೆಟ್ ನ್ನು ಮುಂದಿನ 15 ವರ್ಷಗಳ ವರೆಗೆ ಮೀಸಲಿಡುವ ಕಾನೂನು ಜಾರಿಗೊಳಿಸುವುದು ಹಾಗೂ ‘ಮಣ್ಣು ಉಳಿಸಿ’ ಅಭಿಯಾನದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ರೈತರ ಅದಾಯ ಹೆಚ್ಚಿಸುವ "ಮಣ್ಣು ಪುನಶ್ಚೇತನ ಕಾನೂನು" ಜಾರಿಗೊಳಿಸಿ, ಸಾವಯವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ರೈತರಿಗೆ ಪ್ರೋತ್ಸಾಹ ಧನ ನೀಡುವುದು.
2. ಭಾರತ ದೇಶದಲ್ಲಿ 70 ಪ್ರತಿಶತ ಜನರು ಕೃಷಿಯನ್ನು ಅವಲಂಬಿಸಿದ ಕಾರಣ, ಶಾಲಾ ಪಠ್ಯಪುಸ್ತಕಗಳ ಕನಿಷ್ಠ 33 ಪ್ರತಿಶತ ವಿಷಯವು ಕೃಷಿಗೆ ಸಂಬಂದಿಸಿದ ವಿಷಯವಾಗುವಂತೆ ಕಾನೂನು ಜಾರಿಗೊಳಿಸುವುದು.
3. ಭಾರತ ದೇಶವು ಜಗತ್ತಿನಲ್ಲಿ ಅತೀ ಪುರಾತನ ಕೃಷಿ ಸಂಸ್ಕೃತಿ ಹೊಂದಿರುವುದಕ್ಕೆ ಮೂಲ ಆಧಾರ ಸ್ತಂಭವಾದ ಎತ್ತು ಆಧಾರಿತ ಕೃಷಿಗೆ ವಿಶೇಷ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ‘ನಂದಿ’ಯನ್ನು ರಾಷ್ಟ್ರ ಪ್ರಾಣಿಯನ್ನಾಗಿ ಹೊಸದಾಗಿ ಘೋಷಣೆ ಮಾಡುವುದು.
1. ಅನ್ನದಾತನಿಗೆ ಮೊದಲ ಆದ್ಯತೆ ನೀಡಿ ಪತ್ರ ಚಳುವಳಿಯ
✏️ ಕರಪತ್ರಕ್ಕಾಗಿ ಕ್ಲಿಕ್ ಮಾಡಿ ✏️
2. ಪಕ್ಷಾತೀತವಾಗಿ ರಾಜಕೀಯ ನಾಯಕರಿಗೆ ಸಲ್ಲಿಸಬಹುದಾದ
✏️ ಮನವಿ ಪತ್ರಕ್ಕಾಗಿ ಕ್ಲಿಕ್ ಮಾಡಿ ✏️
--------------------
"ಮುಂದಿನ ದಿನಗಳಲ್ಲಿ ಯಾವ ರಾಜಕಾರಣಿಗಳಿಗೆ ಒಳ್ಳೆಯ ಭವಿಷ್ಯವಿದೆ ಎಂಬುದರ ಕುರಿತು ಬರೆದಿರುವ 'ರಾಜಕೀಯ ಭವಿಷ್ಯ?' ಎಂಬ ಪುಸ್ತಕವನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಓದಿ."
"ಜೋಡೆತ್ತಿನ ಕೃಷಿಯ ಮಹತ್ವದ ಕುರಿತು ವೈಜ್ಞಾನಿಕ ಮಾಹಿತಿ ಇರುವ "ಬಸವ ರಾಜಕೀಯ" ಪುಸ್ತಕವನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಓದಿ."
ನಿಮ್ಮ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ರೈತರನ್ನು ಒಗ್ಗೂಡಿಸುವ ಮಾರ್ಗಗಳನ್ನು ತಿಳಿಯಲು 'ರೈತ ರಾಜಕೀಯ' ಪುಸ್ತಕ ಓದಿ
ಪರಿಹಾರ ಕಂಡುಕೊಳ್ಳಲೇಬೇಕಾದ ರೈತರ ಪ್ರಮುಖ ಸಮಸ್ಯೆಗಳು
ಮಣ್ಣಿನಲ್ಲಿರುವ ಜೀವಸತ್ವ ನಾಶವಾಗಿ ಕಳಪೆ ಆಹಾರ ಉತ್ಪಾದನೆಆಗುವುದರ ಜೊತೆಗೆ ಮಣ್ಣು ಮರಭೂಮಿಕರಣಗೊಳ್ಳುತ್ತಿದೆ.
ರೈತರ ಜಮೀನುಗಳಲ್ಲಿ ಕೆಲಸ ಮಾಡುವ ಕೆಲಸಗಾರರ ತೀವ್ರ ಕೊರತೆ ಉಂಟಾಗುತ್ತಿದೆ.
ಖರ್ಚು ಹೆಚ್ಚಾಗಿ ಆದಾಯ ಕಡಿಮೆಯಾಗುತ್ತಿದೆ.
ಬೆಳೆದ ಬೆಳೆಗೆ ಒಳ್ಳೆಯ ಬೆಲೆ ದೊರೆಯುತ್ತಿಲ್ಲ.
ನೀರಾವರಿ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಇಳುವರಿ ಕುಂಠಿತವಾಗುತ್ತಿದೆ.
"ಇಂದೇ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ, ಬನ್ನಿ ಇದನ್ನು ಸಾಧ್ಯವಾಗಿಸೋಣ."
"ನಡೆ ನಮನ ಪುಸ್ತಕ"
ನಡೆ ನಮನ ಪುಸ್ತಕವನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಓದಿ "ಅಭೀಃ ಫೌಂಡೇಶನ್" ಮೂಲಕ ಪ್ರಾರಂಭಿಸಿದ ಅಭಿಯಾನದ ಉದ್ದೇಶ ಹಾಗೂ ಧ್ಯೇಯದ ಕುರಿತು ಸ್ಪಷ್ಟತೆ ಪಡೆಯಿರಿ.
ಆಧ್ಯಾತ್ಮಿಕ ಸತ್ಪುರುಷರ ಜನ್ಮ ಸ್ಥಳ ಹಾಗೂ ನೆಲೆಸಿರುವ ಸ್ಥಳಗಳಿಂದ ರೈತರಿಂದ ಅಭಿಯಾನಕ್ಕೆ ಚಾಲನೆ
ನಿಮ್ಮ ಸ್ಥಳಗಳಲ್ಲಿ “ಅನ್ನದಾತನಿಗೆ ಮೊದಲ ಆದ್ಯತೆ ನೀಡಿ”ಜನಜಾಗೃತಿ ಕಾರ್ಯಕ್ರಮ ಆಯೋಜಿಸಲು ಸಂಪರ್ಕಿಸಿ
ಓ ರೈತ,
ನಿನ್ನ ಶ್ರಮಕ್ಕೆ ತಕ್ಕ ಬೆಲೆ ಸಿಗುವುದು ಯಾವಾಗ?
ಇದಕ್ಕೆ ಪರಿಹಾರ ಕಂಡುಕೊಳ್ಳುವ ಸೂಕ್ತ ಸಮಯ ಯಾವುದು?
“ಮಣ್ಣು ಮಿತ್ರ”
ಎಂಬ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಇಚ್ಚಿಸುವವರಿಗಾಗಿ
ಕರ್ನಾಟಕ ರಾಜ್ಯಾದ್ಯಂತ ನಡೆಯುತ್ತಿರುವ "ಅನ್ನದಾತನಿಗೆ ಮೊದಲ ಆದ್ಯತೆ ನೀಡಿ" ಚಳುವಳಿಯ ಮೂಲಕ ಮಣ್ಣು ಪುನಶ್ಚೇತನ ಕಾನೂನು ಅನುಷ್ಠಾನಗೊಳಿಸುವ ವಿವಿಧ ಹಂತಗಳು
ಇಂದೇ ಮಣ್ಣು ಮಿತ್ರರಾಗಿ